ಹುನುಗುಂದ‍ನಲ್ಲಿ ಯಶಸ್ವಿಗೊಂಡ ಅಂತಾರಾಷ್ರ್ಟೀಯ ಪ್ರಜಾಪ್ರಭುತ್ವ ದಿನಾಚರಣೆ.


ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯ ಪ್ರಯುಕ್ತ ಬಾಗಲಕೋಟ ಜಿಲ್ಲಾಡಳಿತ ಆಲಮಟ್ಟಿಯಿಂದ ಹಮ್ಮಿಕೊಳ್ಳಲಾದ ಕಾರ್ಯಕ್ರಮದಲ್ಲಿ ಹುನಗುಂದ ತಾಲೂಕಿನ ಎಲ್ಲಾ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಶಿಕ್ಷಕರು ಹಾಗೂ ನೌಕರರ ಬಂದುಗಳು ಅಧಿಕಾರಿಗಳು ಸೇರಿ ಮಾನವ ಸರಪಳಿಯನ್ನು ನಿರ್ಮಿಸಿದರು.ಅದಕ್ಕೂ ಮೊದಲು ಭಾರತದ ಸಂವಿಧಾನ ಪೀಠಿಕೆಯನ್ನು ಓದಲಾಯಿತು ಈ ಸಂಧರ್ಭದಲ್ಲಿ ಹುನಗುಂದ ಇಳಕಲ್ ತಾಲೂಕಿನ ತಹಸೀಲ್ದಾರ್. ಸಮಾಜಕಲ್ಯಾಣ ಅಧಿಕಾರಿಗಳು. ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿರಿ. ಬಿ. ಸಿ. ಎಂ ಅಧಿಕಾರಿ ಹಾಗೂ ತಾಲೂಕ ಮಟ್ಟದ ಆಧಿಕಾರಿಗಳು ಹಾಜರಿದ್ದರು.ಅನೇಕ ಶಾಲಾ ಕಾಲೇಜಿನ ಮಕ್ಕಳು ಮತ್ತು ಅನೇಕ ವಾದ್ಯ ತಂಡಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ವಿ ಗೊಳಿಸಿದರು.ಕಾರ್ಯಕ್ರಮದಲ್ಲಿ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಶರಣಪ್ಪ ಹೂಲಗೇರಿ ಸಂವಿಧಾನ ಪೀಠಿಕೆಯನ್ನು ಹೇಳಿ ಪ್ರಮಾಣ ಮಾಡಿಸಿದರು.

ವರದಿ: ಮಹಾಂತೇಶ ಹಳ್ಳೂರ ಹುನಗುಂದ


Leave a Comment

Your email address will not be published. Required fields are marked *