ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯ ಪ್ರಯುಕ್ತ ಬಾಗಲಕೋಟ ಜಿಲ್ಲಾಡಳಿತ ಆಲಮಟ್ಟಿಯಿಂದ ಹಮ್ಮಿಕೊಳ್ಳಲಾದ ಕಾರ್ಯಕ್ರಮದಲ್ಲಿ ಹುನಗುಂದ ತಾಲೂಕಿನ ಎಲ್ಲಾ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಶಿಕ್ಷಕರು ಹಾಗೂ ನೌಕರರ ಬಂದುಗಳು ಅಧಿಕಾರಿಗಳು ಸೇರಿ ಮಾನವ ಸರಪಳಿಯನ್ನು ನಿರ್ಮಿಸಿದರು.ಅದಕ್ಕೂ ಮೊದಲು ಭಾರತದ ಸಂವಿಧಾನ ಪೀಠಿಕೆಯನ್ನು ಓದಲಾಯಿತು ಈ ಸಂಧರ್ಭದಲ್ಲಿ ಹುನಗುಂದ ಇಳಕಲ್ ತಾಲೂಕಿನ ತಹಸೀಲ್ದಾರ್. ಸಮಾಜಕಲ್ಯಾಣ ಅಧಿಕಾರಿಗಳು. ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿರಿ. ಬಿ. ಸಿ. ಎಂ ಅಧಿಕಾರಿ ಹಾಗೂ ತಾಲೂಕ ಮಟ್ಟದ ಆಧಿಕಾರಿಗಳು ಹಾಜರಿದ್ದರು.ಅನೇಕ ಶಾಲಾ ಕಾಲೇಜಿನ ಮಕ್ಕಳು ಮತ್ತು ಅನೇಕ ವಾದ್ಯ ತಂಡಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ವಿ ಗೊಳಿಸಿದರು.ಕಾರ್ಯಕ್ರಮದಲ್ಲಿ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಶರಣಪ್ಪ ಹೂಲಗೇರಿ ಸಂವಿಧಾನ ಪೀಠಿಕೆಯನ್ನು ಹೇಳಿ ಪ್ರಮಾಣ ಮಾಡಿಸಿದರು.
ವರದಿ: ಮಹಾಂತೇಶ ಹಳ್ಳೂರ ಹುನಗುಂದ