ಸ್ಕೂಟಿಯಲ್ಲಿ ಕೊಡೆ ಹಿಡಿದು ಹೋಗುತ್ತಿದ್ದ ವೇಳೆ ಸ್ಕೂಟಿ ಲಾರಿಗೆ ಡಿಕ್ಕಿ; ಬೈಕ ಸವಾರ ಸಾವು


ಮಳೆ ಹನಿಗಳಿಂದ ರಕ್ಷಣೆಗೆಂದು ಕೊಡೆ ಹಿಡಿದುಕೊಂಡು ಸ್ಕೂಟಿ ವಾಹನ ಚಲಾಯಿಸುತ್ತಿದ್ದಾಗ ರಸ್ತೆ ಪಕ್ಕ ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಓರ್ವ ಯುವಕ ಸ್ಥಳದಲ್ಲಿಯೇ ಸಾವನಪ್ಪಿ ಮತ್ತೋರ್ವನಿಗೆ ಗಂಭೀರ ಗಾಯವಾಗಿರುವ ಘಟನೆ ಧಾರವಾಡ ಹೊರವಲಯದ ರಾಷ್ಟ್ರೀಯ ಹೆದ್ದಾರಿ ನರೇಂದ್ರ ಕ್ರಾಸ್ ಸಮೀಪ ಬುಧುವಾರ ತಡ ಸಂಜೆ ನಡೆದಿದೆ.

ಧಾರವಾಡ ನಗರದ ಮುರುಘಾಮಠ ಬಳಿಯ ನಿವಾಸಿ ವಿಶ್ವಾಸ ಕೇಟಿಮಠ (21) ಸಾವನ್ನಪ್ಪಿದ ಯುವಕ. ವಿನಾಯಕ ಬಡಿಗೇರ (19) ಎಂಬಾತ ಯುವಕ ಗಂಭೀರವಾಗಿ ಗಾಯಗೊಂಡಿದ್ದಾನೆ. ಇನ್ನೂ ಈ ಇಬ್ಬರೂ ಯುವಕರು ವಾಪಸ್ ಧಾರವಾಡಕ್ಕೆ ಬರುತ್ತಿದ್ದ ಸಂದರ್ಭದಲ್ಲಿ ರಸ್ತೆ ಪಕ್ಕ ನಿಂತಿದ್ದ ಲಾರಿಗೆ ಸ್ಕೂಟಿ ಡಿಕ್ಕಿ ಹೊಡೆದಿದೆ. ಇದರಿಂದ ಗಂಭೀರವಾಗಿ ಗಾಯಗೊಂಡ ವಿಶ್ವಾಸ್‌ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಗಂಭೀರ ಗಾಯಾಳನ್ನು ಚಿಕಿತ್ಸೆಗಾಗಿ ಧಾರವಾಡ ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಗಿದೆ. ಘಟನಾ ಸ್ಥಳಕ್ಕೆ ಧಾರವಾಡ ಗ್ರಾಮೀಣ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ದೂರು ದಾಖಲಿಸಿಕೊಂಡಿದ್ದಾರೆ.


Leave a Comment

Your email address will not be published. Required fields are marked *